ಬುಧವಾರ, ಜುಲೈ 6, 2011

ಬಿಳಿಗಿರಿರಂಗನ ಬೆಟ್ಟದ ನಿವಾಸಿಗಳ ಗೋಳು ಅರಣ್ಯರೋದನ

ಡಿ.ಪಿ. ಶಂಕರ್ ಯಳಂದೂರು
ಒಂದೆಡೆ ದುಡಿದರೂ ಹಣವಿಲ್ಲ... ಮತ್ತೊಂದೆಡೆ ತಮ್ಮೂರಿಗೆ ಮೂಲ ಸೌಲಭ್ಯವಿಲ್ಲ... ಇದೆಲ್ಲದರ ನಡುವೆ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ನೀಡಿದ ಆಶ್ವಾಸನೆಗಳು ಇಂದಿಗೂ ಈಡೇರಿಲ್ಲ. ಪರಿಣಾಮ ಗಿರಿಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. 
ಇದು ಬಿಳಿಗಿರಿರಂಗನಬೆಟ್ಟದ ಸುತ್ತಮುತ್ತಲ ಸುಮಾರು ೧೦ ಹಾಡಿಗಳ ಗಿರಿಜನರ ಪಾಡು. ಇಲ್ಲಿನ ಮಂದಿ ಅಕ್ಷರಶಃ ಸಮಸ್ಯೆಗಳ ಸುಳಿಗೆ ಸಿಲುಕಿದ್ದಾರೆ. ಸಮಸ್ಯೆ ಬಗೆಹರಿಸುವುದಾಗಿ ಹೇಳಿ ಹೋದ ಆಡಳಿತ ವರ್ಗ ಮತ್ತೆ ಇತ್ತ ತಿರುಗಿಯೂ ನೋಡದೇ ಇರುವುದು ಗಿರಿಜನರಲ್ಲಿ ತೀವ್ರ ಹತಾಷೆ ಮೂಡಿಸಿದೆ. ಈ ಹಾಡಿಗಳ ಗಿರಿಜನರ ಗೋಳು ಅರಣ್ಯರೋದನ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ