ಸೋಮವಾರ, ಜುಲೈ 11, 2011

ದ್ವೀಪ ಗ್ರಾಮಕ್ಕೆ ಸೇತುವೆ ಮರೀಚಿಕೆ


 ವಿಕ ವಿಶೇಷ ಕೊಳ್ಳೇಗಾಲ
ಮಳೆಗಾಲ ಆರಂಭವಾದರೆ ಮಾತ್ರ ಜಿಲ್ಲಾಡಳಿತಕ್ಕೆ ದ್ವೀಪ ಗ್ರಾಮ ಯಡಿಕುರಿಯ ನೆನಪಾಗುತ್ತದೆ.
ಕಾವೇರಿ ನದಿಯಿಂದ ದ್ವೀಪವಾಗಿ ಮಾರ್ಪಟ್ಟಿರುವ ಗ್ರಾಮ ಇಲ್ಲಿಯ ತನಕ ಮರೆತುಹೋಗಿತ್ತು. ಈಗ ನೆನಪಿಗೆ ಬರುತ್ತಿದೆ. ಮುಂಗಾರು ಮಳೆ ಆರಂಭವಾಗಿ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಪ್ರವಾಹದ ಭೀತಿ ಗ್ರಾಮಸ್ಥರನ್ನು ಕಾಡುತ್ತಿದೆ.

ಬುಧವಾರ, ಜುಲೈ 6, 2011


ಬಿಳಿಗಿರಿರಂಗನ ಬೆಟ್ಟದ ನಿವಾಸಿಗಳ ಗೋಳು ಅರಣ್ಯರೋದನ

ಡಿ.ಪಿ. ಶಂಕರ್ ಯಳಂದೂರು
ಒಂದೆಡೆ ದುಡಿದರೂ ಹಣವಿಲ್ಲ... ಮತ್ತೊಂದೆಡೆ ತಮ್ಮೂರಿಗೆ ಮೂಲ ಸೌಲಭ್ಯವಿಲ್ಲ... ಇದೆಲ್ಲದರ ನಡುವೆ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ನೀಡಿದ ಆಶ್ವಾಸನೆಗಳು ಇಂದಿಗೂ ಈಡೇರಿಲ್ಲ. ಪರಿಣಾಮ ಗಿರಿಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. 
ಇದು ಬಿಳಿಗಿರಿರಂಗನಬೆಟ್ಟದ ಸುತ್ತಮುತ್ತಲ ಸುಮಾರು ೧೦ ಹಾಡಿಗಳ ಗಿರಿಜನರ ಪಾಡು. ಇಲ್ಲಿನ ಮಂದಿ ಅಕ್ಷರಶಃ ಸಮಸ್ಯೆಗಳ ಸುಳಿಗೆ ಸಿಲುಕಿದ್ದಾರೆ. ಸಮಸ್ಯೆ ಬಗೆಹರಿಸುವುದಾಗಿ ಹೇಳಿ ಹೋದ ಆಡಳಿತ ವರ್ಗ ಮತ್ತೆ ಇತ್ತ ತಿರುಗಿಯೂ ನೋಡದೇ ಇರುವುದು ಗಿರಿಜನರಲ್ಲಿ ತೀವ್ರ ಹತಾಷೆ ಮೂಡಿಸಿದೆ. ಈ ಹಾಡಿಗಳ ಗಿರಿಜನರ ಗೋಳು ಅರಣ್ಯರೋದನ.